Home year2023 *ವಂದನೀಯ ಮಾತಾಜಿಯವರ ಅಂತಿಮ ಇಚ್ಛೆ*

*ವಂದನೀಯ ಮಾತಾಜಿಯವರ ಅಂತಿಮ ಇಚ್ಛೆ*

by Akhand Jyoti Magazine

Loading

ಗಾಯತ್ರಿ ಪರಿವಾರದ ಹೆಸರಿನಲ್ಲಿ ಅಲ್ಲಲ್ಲಿ ಹಚ್ಚಿಕೊಂಡಿರುವ ನನ್ನ ಅಗಣಿತ ಸಂಖ್ಯೆಯ ಮಕ್ಕಳಲ್ಲಿ ನನ್ನ ಒಂದೇ ಒಂದು ವಿಜ್ಞಾಪನೆ ಎಂದರೆ ಸಮಯದ ವಿಷಮತೆಯನ್ನು ಅರಿತುಕೊಳ್ಳಿರಿ. ಮತ್ತು ಒಂದಕ್ಕಿಂತ ಮತ್ತೊಂದು ಮಿಗಿಲು ಎಂಬಂತೆ ಸಮಯ, ಸಾಧನಾ ಮುಂತಾದವುಗಳನ್ನು ಮಹಾಕಾಲದ ಚರಣಕ್ಕೆ ಸಮರ್ಪಿಸಲು ಮುಂದೆ ಬನ್ನಿ. ಸರ್ವರೂ ಒಂದಾಗಿ ಒಂದು ವಿರಾಟ ಪರಿವಾರದ ಸದಸ್ಯರಾಗಿ ವಸುಧೈವ ಕುಟುಂಬಕಮ್ ಎಂಬ ನನ್ನ ಸ್ವಪ್ನವನ್ನು ಸಾಕಾರಗೊಳಿಸಿರಿ. ದೇವ ಸಂಸ್ಕೃತಿಯ ಪ್ರಕಾಶ ಮನೆ ಮನೆಯನ್ನು ತಲುಪಲಿ. ಪ್ರತಿಯೊಬ್ಬರ ಜೀವನದಲ್ಲಿ ಕ್ರಾಂತಿಕಾರೀ ಪರಿವರ್ತನೆ ಉಂಟಾಗಲಿ. ಸೂಕ್ಷ್ಮ ಜಗತ್ತಿನಲ್ಲಿ ವ್ಯಾಪ್ತವಾಗಿರುವ ಋಷಿ ಸತ್ತಾದ ಇಚ್ಚೆಯೂ ಇದೇ ಆಗಿರುವುದು.

ಇದನ್ನು ಈಡೇರಿಸಲು ನನ್ನ ಮಕ್ಕಳು ಮುಂದಾಗಿ ಬರಲಿ (ಪರಮಪೂಜ್ಯ ಗುರುದೇವರು ಇದೇ ರೂಪದಲ್ಲಿ ಸಕ್ರಿಯರಾಗಿರುವರು. ಸೂಕ್ಷ್ಮ ಮತ್ತು ಕಾರಣ ಶರೀರದಿಂದ ಯುಗ ಪರಿವರ್ತನೆಯ ಕಾರ್ಯವೆಸಗುತ್ತಿರುವರು.) ನನ್ನ ಮಕ್ಕಳ ಭುಜ ಬಲ ಅಪ್ರತಿಮವಾಗಿದೆ. ಅವರು ತಮ್ಮ ಉತ್ತರದಾಯಿತ್ವವನ್ನು ಅತ್ಯಂತ ಉತ್ಕೃಷ್ಟ ರೀತಿಯಲ್ಲಿ ನಿರ್ವಹಿಸುತ್ತಿರಲಿ. ಈ ಭೂಮಿಯನ್ನೇ ಸ್ವರ್ಗವಾಗಿ ಪರಿವರ್ತಿಸಿಕೊಳ್ಳುವಂತಹ ಸಂವೇದನೆ ಪ್ರತಿಯೋರ್ವರ ಹೃದಯದಲ್ಲಿ ಹುಟ್ಟಿ ಬೆಳೆದು ವಿಕಸಿತವಾಗಲಿ. ಶೀಘ್ರದಲ್ಲಿಯೇ ದೇವ ಸಂಸ್ಕೃತಿ; ವಿಶ್ವ ಸಂಸ್ಕೃತಿಯ ರೂಪದಲ್ಲಿ ಪ್ರಸಾರಗೊಳ್ಳಲಿ: ಇದೇ ನನ್ನ ಆಕಾಂಕ್ಷೆ, ಸರ್ವರಿಗೂ ನನ್ನ ಕೋಟಿ ಕೋಟಿ ಆಶೀರ್ವಾದ.

ಅಖಂಡ ಜ್ಯೋತಿ

| ಸೆಪ್ಟೆಂಬರ್ – ಆಕ್ಟೋಬರ್ 2018 |

You may also like