Home year2023 ಸುಖ ಜೀವನದ ಮಾರ್ಗ

ಸುಖ ಜೀವನದ ಮಾರ್ಗ

by Akhand Jyoti Magazine

Loading

ತತ್ವಶಾಸ್ತ್ರದ ಅಧ್ಯಾಪಕರು ಒಮ್ಮೆ ತಮ್ಮ ತರಗತಿಯಲ್ಲಿ ಭೋದನೆ ವೇಳೆಯಲ್ಲಿ ಮೇಜಿನ ಮೇಲೆ ಖಾಲಿ ಬಾಟಲಿಗಳನ್ನು ಮತ್ತು ವಿವಿಧ ಆಕಾರದ ಕಲ್ಲು, ಮರಳನ್ನು ಇಟ್ಟುಕೊಂಡು ತರಗತಿ ಪ್ರಾರಂಭಿಸಿದರು.

ಖಾಲಿಯಾದ ಬಾಟಲಿಗೆ ದಪ್ಪವಾದ ಕಲ್ಲಿನ ಚೂರುಗಳನ್ನು ತುಂಬಿಸಿ, ಈ ಬಾಟಲಿ ಭರ್ತಿಯಾಯಿತೆ? ಎಂದು ಪ್ರಶ್ನಿಸಿದರು. ವಿದ್ಯಾರ್ಥಿಗಳಿಂದ ಬಂದ ಉತ್ತರ ಹೌದೆಂದು. ಅದೇ ಬಾಟಲಿಯಲ್ಲಿ ಮತ್ತೆ ಸಣ್ಣ-ಸಣ್ಣ ಕಲ್ಲಿನ ಚೂರುಗಳನ್ನು ಹಾಕಿ ಚೆನ್ನಾಗಿ ಕುಲುಕಿದರು. ದಪ್ಪ ಕಲ್ಲಿನ ಚೂರಿನ ಸಂದಿಯಲ್ಲೆಲ್ಲಾ ಈ ಸಣ್ಣ ಕಲ್ಲಿನ ಚೂರುಗಳು ಸೇರಿಕೊಂಡವು ಮತ್ತೊಮ್ಮೆ ಅಧ್ಯಾಪಕರು ಈಗ ಬಾಟಲಿ ತುಂಬಿದೆಯೇ? ಎಂದು ಪ್ರಶ್ನಿಸಲು ಮತ್ತೆ ವಿದ್ಯಾರ್ಥಿಗಳಿಂದ ಅದೇ ಹೌದೆನ್ನುವ ಉತ್ತರ. ಇನ್ನೊಮ್ಮೆ ತತ್ವಶಾಸ್ತ್ರದ ಅಧ್ಯಾಪಕರು ಮರಳನ್ನು ಅದೇ ಬಾಟಲಿಗೆ ಹಾಕಿ ಚೆನ್ನಾಗಿ ಕುಲುಕಿದರು. ಈಗ ಆ ಮರಳಿನ ಕಣಗಳೆಲ್ಲವೂ ಖಾಲಿಯಿದ್ದ ಸಣ್ಣ-ಸಣ್ಣ ಭಾಗದಲ್ಲೆಲ್ಲಾ ತುಂಬಿ ಮತ್ತೆ ಭರ್ತಿಯಾಯಿತು. ಮತ್ತೊಮ್ಮೆ ವಿದ್ಯಾರ್ಥಿಗಳಿಂದ ಒಂದೇ ಸ್ವರದಿಂದ ತುಂಬಿದೆ ಎಂಬ ಉತ್ತರ ಬಂತು.

ಅಧ್ಯಾಪಕರು ತಿಳಿಸುತ್ತಾರೆ, ‘ಈ ಬಾಟಲಿ(ಸೀಸೆ)ಯು ನಿಮ್ಮ ಜೀವನವನ್ನು ಸೂಚಿಸುತ್ತದೆ. ದೊಡ್ಡ ಕಲ್ಲಿನ ಚೂರುಗಳು – ಸಂಸಾರ, ಆರೋಗ್ಯ ಮತ್ತು ಮಕ್ಕಳನ್ನು ಬಿಂಬಿಸುತ್ತದೆ. ಬೇರೆಲ್ಲಾ ಬೇಡವೆಂದಾಗ ಈ ಮೂರರಿಂದ ನಿಮ್ಮ ಜೀವನ ತುಂಬಿರುತ್ತದೆ. ಸಣ್ಣ ಕಲ್ಲಿನ ಚೂರುಗಳು – ವೃತ್ತಿ, ಮನೆ ಮತ್ತು ಭೋಗದ ವಸ್ತುಗಳಾದ ವಾಹನ, ಟಿವಿ, ರೆಫ್ರಿಜರೇಟರ್ ಇಂಥವುಗಳನ್ನು ಬಿಂಬಿಸುತ್ತದೆ. ಇವುಗಳಿಂದಲೂ ನಿಮ್ಮಗಳ ಜೀವನ ತುಂಬಿರುತ್ತದೆ. ಮರಳು ಜೀವನದ ಅನೇಕಗಳನ್ನು ಬಿಂಬಿಸುತ್ತದೆ. ಅವುಗಳು ಸಣ್ಣ-ಸಣ್ಣ ವಿಷಯಗಳಿಂದ ತುಂಬಿದವು.

ಆದುದರಿಂದ ಮರಳಂತೆ ಸಣ್ಣ-ಸಣ್ಣ ವಿಚಾರಗಳಿಂದಲೇ ನಿಮ್ಮ ಜೀವನವನ್ನು ತುಂಬಿಸಿದರೆ ಭೋಗ, ವೃತ್ತಿ, ಪ್ರವೃತ್ತಿಗಳಿಗೆ ಸ್ಥಾನವಿಲ್ಲದಂತೆ ಅವಕಾಶವಿರುವುದಿಲ್ಲ. ಅದುದರಿಂದ ಸಣ್ಣದಾದ ಕ್ಲಿಷ್ಟ ಸಂಗತಿಗಳಿಗೆ ಗಮನಕೊಟ್ಟರೆ ಅದು ನಿಮ್ಮ ಸುಖಕ್ಕೆ ಮಾರ್ಗ. ಈ ಸನ್ಮಾರ್ಗದಲ್ಲಿ ನಡೆದರೆ ಕಲ್ಲಿನಂತಹ ಸಂಸಾರ, ಆರೋಗ್ಯ, ಮಕ್ಕಳು, ಮನೆ, ವೃತ್ತಿ, ವಸ್ತುಗಳೆಲ್ಲಾ ತನ್ನಷ್ಟಕ್ಕೆ ತಾನೇ ಕಾರ್ಯ ಸಾಧನೆಯಾಗುತ್ತದೆ. ನಿಮ್ಮ ಕಾರ್ಯ ವಿಂಗಡಿಸಿ, ಆ ಕಾರ್ಯಗಳಿಗೆ ಗಡುವು(ಸಮಯ) ನಿಗದಿಸಿ. ಮಿಕ್ಕವುಗಳು ತನ್ನಷ್ಟಕ್ಕೆ ತಾನೇ ಜರುಗುತ್ತದೆ.

You may also like